News Karnataka
ವಿಶೇಷ

ನಗರದಲ್ಲಿ ಮಾ. ೧೮ರಂದು ಕಡವೆ ಬೇಟೆ ನಾಟಕ ಪ್ರದರ್ಶನ

Kadave Bete drama will be performed in hassan by association with Uliwala School of Drama and Inner Wheel Club.
Photo Credit : Bharath

ಹಾಸನ: ಉಲಿವಾಲ ಸ್ಕೂಲ್ ಆಫ್ ಡ್ರಾಮಾ, ಇನ್ನರ್ ವೀಲ್ ಕ್ಲಬ್ ಸಹಕಾರದೊಂದಿಗೆ ಶ್ರೀ ಹಾಡ್ಲಹಳ್ಳಿ ನಾಗರಾಜ್ ಅವರ ಕಾದಂಬರಿ ಆಧಾರಿತ ಕಡವೆ ಬೇಟೆ ನಾಟಕ ಮಾ. ೧೮ರಂದು ಪ್ರದರ್ಶನವಾಗಲಿದೆ ಎಂದು ನಿರ್ದೇಶಕ ಹೆಚ್. ಜಿ. ರತಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಗರದ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಮಾರ್ಚ್ ೧೮ರ ಸಂಜೆ ೭ ಗಂಟೆಗೆ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ಮಲೆನಾಡು ಪ್ರದೇಶದಲ್ಲಿನ ವನ್ಯಜೀವಿಗಳ ಶಿಕಾರಿ ಜೀವನಾಧಾರಿತ ಹಾಗೂ ಮನುಷ್ಯರ ನಡುವೆ ನಡೆಯುವ ಭಾವನಾತ್ಮಕ ಶಿಕಾರಿಯು ನಾಟಕದ ವಸ್ತುವಾಗಿದೆ ಎಂದರು.

ಹಾಡ್ಲಹಳ್ಳಿ ಪಬ್ಲಿಕೇಶನ್ ಸಹಕಾರದೊಂದಿಗೆ ಕಡವೆ ಭೇಟಿ ಸಾಮಾಜಿಕ ಕಳಕಳಿಯ ನಾಟಕ ಪ್ರದರ್ಶನ ಮಾಡಲಾಗುತ್ತಿದ್ದು, ಹಾಸನಾಂಬ ಕಲಾ ಕ್ಷೇತ್ರದಲ್ಲಿ ಉಚಿತ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಸುಮಾರು ೫೦೦ಕ್ಕೂ ಹೆಚ್ಚು ಮಂದಿಗೆ ನಾಟಕ ನೋಡುವ ಅವಕಾಶ ದೊರೆಯಲಿದೆ ಎಂದರು. ತನುಜಾ, ನಳಿನಿ, ಮಮತಾ, ಅರುಣ್ ಕುಮಾರ್ ಇದ್ದರು.

MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *