News Karnataka
Saturday, June 10 2023
ರಾಜಕೀಯ

ಮಾ. ೧೦ಕ್ಕೆ ಅರಕಲಗೂಡಿಗೆ ವಿಜಯ ಸಂಕಲ್ಪ ರಥ ಪ್ರವೇಶ

The Vijaya sankalpa chariot, which has toured across the State, will reach Arakalagud, Hassan district on March 10.
Photo Credit : Bharath

ಅರಕಲಗೂಡು: ರಾಜ್ಯಾದ್ಯಂತ ಪ್ರವಾಸ ಕೈಗೊಂಡಿರುವ ವಿಜಯಸಂಕಲ್ಪ ರಥವು ಮಾರ್ಚ್ ೧೦ರಂದು ಅರಕಲಗೂಡಿಗೆ ಆಗಮಿಸಲಿದೆ ಎಂದು ಬಿಜೆಪಿ ಮುಖಂಡ ಎಚ್.ಯೋಗಾರಮೇಶ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಿಜಯ ಸಂಕಲ್ಪ ಯಾತ್ರೆಯು ಮಾರ್ಚ್ ೧೦ರಂದು ಮಧ್ಯಾಹ್ನ ೧೨ ಗಂಟೆಗೆ ಕಳ್ಳಿಮುದ್ದನಹಳ್ಳಿಗೆ ಆಗಮಿಸಲಿದೆ. ರಥವನ್ನು ನೂರಾರು ಸಂಖ್ಯೆಯಲ್ಲಿ ಬೈಕ್ ಮೂಲಕ ಸ್ವಾಗತಿಸಲಾಗುವುದು.

ನಂತರ ಅರಕಲಗೂಡು ಪಟ್ಟಣದ ಪೇಟೆ ಹಾಗೂ ಕೋಟೆ ಮೂಲಕ ಸಾಗಿ ತಾಲೂಕು ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುವುದು. ಶ್ರೀ ದೊಡ್ಡಮ್ಮತಾಯಿ ದೇವಸ್ಥಾನದ ಬಳಿ ಪೂಜೆ ಸಲ್ಲಿಸಿದ ನಂತರ ಸಾರ್ವಜನಿಕ ಸಭೆ ಅದ್ದೂರಿಯಾಗಿ ನಡೆಯಲಿದೆ ಎಂದರು.

ಈ ರಥಯಾತ್ರೆಗೆ ಬಿಜೆಪಿಯ ಎಲ್ಲಾ ಪದಾಧಿಕಾರಿಗಳು ಮುಖಂಡರು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಎಂ.ಟಿ ಸತ್ಯನಾರಾಯಣ, ಅರಕಲಗೂಡು ತಾಲೂಕಿನ ಬಿಜೆಪಿ ಚುನಾವಣಾ ಪ್ರಭಾರಿ ಕೊರಟೀಗೆರೆ ಪ್ರಕಾಶ, ಕಾರ್ಯದರ್ಶಿ ಲೋಕೇಶ, ಶ್ರೀನಿವಾಸ ಇದ್ದರು.

MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *