ಹಾಸನ: ಜೆಡಿಎಸ್ ಟಿಕೆಟ್ ದಂಗಲ್ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿರೋ ಸ್ವರೂಪ್, ಚುನಾವಣಾ ಕಣದಿಂದ್ಲೇ ಹಿಂದೆ ಸರಿಯಲು ಮುಂದಾಗಿದ್ದಾರೆನ್ನಲಾಗುತ್ತಿದೆ. ಏಕೆಂದರೆ ಸ್ವರೂಪ್ಗೆ ಟಿಕೆಟ್ ನೀಡಿದರೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕುಟುಂಬದಲ್ಲೇ ಬಿರುಕು ಉಂಟಾಗುವ ಸಾಧ್ಯತೆಯಿದೆ. ಕುಟುಂಬ ಒಡೆದ ಅಪವಾದದಿಂದ ತಪ್ಪಿಸಿಕೊಳ್ಳಲು ಸ್ವರೂಪ್ ಪ್ಲ್ಯಾನ್ ಮಾಡಿದ್ದಾರಂತೆ. ದೇವೇಗೌಡರ ಕುಟುಂಬ ಇಬ್ಭಾಗ ಮಾಡಿದರೆ ಕೆಟ್ಟ ಸಂದೇಶ, ಮುಂದೆ ಸ್ವರೂಪ್ ರಾಜಕೀಯ ಭವಿಷ್ಯಕ್ಕೂ ಪೆಟ್ಟು ಬೀಳುವ ಸಾಧ್ಯತೆಯಿದೆ. ಹೀಗಾಗಿ ಚುನಾವಣಾ ಕಣದಿಂದ ಹಿಂದೆ ಸರಿಯಲು ಸ್ವರೂಪ್ ಚಿಂತಿಸಿದ್ದಾರಂತೆ. ಭವಾನಿ ರೇವಣ್ಣ ಪರ ಕೆಲಸ ಮಾಡಲು ಸಜ್ಜಾಗಿದ್ದಾರೆನ್ನಲಾಗಿದೆ.
ಹಿಂದೆ ಸರಿಯುತ್ತಾರಾ ಸ್ವರೂಪ್?

Photo Credit :
Bharath
MANY DROPS MAKE AN OCEAN
Support NewsKarnataka's quality independent journalism with a small contribution.