News Karnataka
Saturday, June 10 2023
ರಾಜಕೀಯ

ಪೊರಕೆ ಪರಿಹಾರ ಅಭಿಯಾನ

The Campaign was held in various places including the Kuvempunagar, Shankar Mutt in Hassan under the Broom relief Campaign for the AAP.
Photo Credit : Bharath

ಹಾಸನ: ಆಮ್ ಆದ್ಮಿ ಪಕ್ಷದ ಪೊರಕೆಯೆ ಪರಿಹಾರ ಎಂಬ ಅಭಿಯಾನದ ಅಡಿಯಲ್ಲಿ ಇಂದು ನಗರದ ಕುವೆಂಪು ನಗರ, ಶಂಕರ ಮಠ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಅಗಿಲೆ ಯೋಗೀಶ್ ನೇತೃತ್ವದಲ್ಲಿ ಪ್ರಚಾರ ನಡೆಯಿತು.

ನಗರದ ವಿವಿಧ ಬಡಾವಣೆಯ ಮತದಾರರಿಗೆ ಪೊರಕೆ ವಿತರಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಪ್ರಚಾರ ನಡೆಸಿ ಮಾತನಾಡಿದ ಅವರು, ರಾಜ್ಯ ಹಾಗೂ ದೇಶದಲ್ಲಿ ದುರಾಡಳಿತ ನಡೆಸುತ್ತಿರುವ ಜೆಸಿಬಿ ಪಕ್ಷಗಳನ್ನು ಗುಡಿಸಲು ಪೊರಕೆಯಿಂದ ಮಾತ್ರ ಸಾಧ್ಯ, ಆದುದರಿಂದ ಪೊರಕೆ ಉಪಯೋಗಿಸಿ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷಗಳನ್ನು ಗುಡಿಸಿ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ರಾಜ್ಯ ರಾಜಕೀಯದಲ್ಲಿ ಕಮಲ ಬಾಡಿದೆ, ತೆನೆ ಉದುರಿದೆ, ಕೈ ಕೊಳೆತಿದೆ ಎನ್ನುವ ಮೂಲಕ ಮೂರು ಪಕ್ಷಗಳ ಬಗ್ಗೆ ವ್ಯಂಗ್ಯವಾಡಿದ ಅವರು ಪೊರಕೆಯಿಂದ ಮಾತ್ರ ದೇಶದ ಭ್ರಷ್ಟಾಚಾರ ಗುಡಿಸಲು ಸಾಧ್ಯ ಎಂಬುದನ್ನು ಜನರಲ್ಲಿ ಅರಿವು ಮೂಡಿಸಿ ಪೊರಕೆ ಗುರುತಿನ ಆಮ್ ಆದ್ಮಿ ಪಕ್ಷ ಬೆಂಬಲಿಸುವಂತೆ ಮನವಿ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡರಾದ ಶಂಕ ಮಂಜು, ಅಬೀಬ್, ಸುಂದರೇಶ್, ರೆಹಮತ್, ರಂಗಸ್ವಾಮಿ, ನಜೀರ್, ಜ್ಯೋತಿ ಇತರರು ಇದ್ದರು.

MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *