News Karnataka
ರಾಜಕೀಯ

ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರಿದ ಗ್ರಾಮ ಪಂಚಾಯತ್ ಸದಸ್ಯ

Mallesh, member of Bhutana gudi gram panchayat of Belur taluk, left the Congress party and joined the BJP party.
Photo Credit : Bharath

ಬೇಲೂರು: ಪ್ರತಿದಿನ ದೊಡ್ಡ ಸಂಖ್ಯೆಯಲ್ಲಿ ಅನ್ಯ ಪಕ್ಷಗಳನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವವರ ಸಂಖ್ಯೆಯನ್ನು ನೋಡಿದರೆ ಸಂತೋಷವಾಗುತ್ತದೆ. ಇದು ಬಿಪಿಯ ಗೆಲುವಿನ ಸಂಕೇತವನ್ನು ತೋರುತ್ತಿದೆ. ಇದೇ ರೀತಿ ಇನ್ನು ಕೆಲವೇ ದಿನಗಳ ಕಾಲ ಸೇರ್ಪಡೆ ಮತ್ತು ಕಾರ್ಯಕರ್ತರ ಶಕ್ತಿ ಪ್ರದರ್ಶನವಾಗುತ್ತಿದ್ದರೆ ನಾವು ಗೆಲ್ಲುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಬೇಲೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಚ್.ಕೆ ಸುರೇಶ್ ಹೇಳಿದರು.

ಭೂತನಗುಡಿ ಗ್ರಾಮಪಂಚಾಯತ್ ಸದಸ್ಯ ಮಲ್ಲೇಶ್ ಬಿಜೆಪಿಗೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿರುವ ಜನರನ್ನು ನೋಡಿದರೆ, ಜನರಿಗೆ ಸತ್ಯದ ಅರಿವಾದಂತಿದೆ. ಎಲ್ಲರಿಗೂ ಈಗ ಬಿಜೆಪಿಯ ಮಹತ್ವ ಅರಿವಿಗೆ ಬಂದಿದೆ. ಇದೇ ರೀತಿಯಾಗಿ ಇನ್ನು ಕೆಲವೇ ಸಮಯದಲ್ಲಿ ಇಡೀ ಬೇಲೂರು ಬಿಜೆಪಿಯ ಭದ್ರಕೋಟೆಯಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸೇರ್ಪಡೆಗೊಂಡ ಮಲ್ಲೇಶ್, ಇಷ್ಟು ದಿನಗಳ ಕಾಲ ಬೇರೆ ಪಕ್ಷಗಳ ಆಡಳಿತವನ್ನು ನೋಡಿ ಬೇಸತ್ತು ಈಗ ಬಿಜೆಪಿ ಪಕ್ಷದ ಮೇಲೆ ಭರವಸೆಯಿಟ್ಟು ಬಂದಿದ್ದೇನೆ. ಇದು ಖಂಡಿತವಾಗಿಯೂ ಫಲವನ್ನು ನೀಡುತ್ತದೆಯೆನ್ನುವ ನಂಬಿಕೆಯಿದೆ ಮತ್ತು ಸುರೆಶಣ್ಣ ಗೆಲ್ಲುತ್ತಾರೆನ್ನುವ ಆತ್ಮವಿಶ್ವಾಸ ನನ್ನಂತಹ ಲಕ್ಷಾಂತರ ಜನರಲ್ಲಿದೆ ಎಂದು ಹೇಳಿದರು.

MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *