News Karnataka
ವರ್ಗೀಕೃತ

ವಕಾಲತ್ತುಗಳನ್ನು ಶೀಘ್ರದಲ್ಲಿ ಪರಿಹರಿಸಿ ಕಕ್ಷಿದಾರರಿಗೆ ಅನುಕೂಲ ಮಾಡಿ

The judge handed over the key to the office lock of the lawyer's house constructed at arakalagud in Hassan to the bar association.
Photo Credit : Bharath

ಅರಕಲಗೂಡು: ವಕೀಲರುಗಳು ತಮ್ಮ ಕಕ್ಷಿದಾರರ ವಕಾಲತುಗಳನ್ನು ಶೀಘ್ರದಲ್ಲಿ ಪರಿಹರಿಸಿ ಕಕ್ಷಿದಾರರಿಗೆ ಅನುಕೂಲ ಮಾಡಿಕೊಡಬೇಕೆಂದು ಹಿರಿಯ ಶ್ರೇಣಿ ನ್ಯಾಯಾಧೀಶ ಮುಜಾಫರ್ ತಿಳಿಸಿದರು.

ನ್ಯಾಯಾಲಯದ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ವಕೀಲರ ಭವನದ ಕಚೇರಿಯ ಬೀಗದ ಕೀಯನ್ನು ವಕೀಲರ ಸಂಘಕ್ಕೆ ಹಸ್ತಾಂತರಿಸಿ ಮಾತನಾಡಿದ ಅವರು, ಕಕ್ಷಿದಾರರು ಶೀಘ್ರದಲ್ಲಿ ನ್ಯಾಯ ದೊರಕುತ್ತದೆ ಎಂದು ವಕೀಲರಿಗೆ ವಕಾಲತ್ತುಗಳನ್ನು ವಹಿಸಿರುತ್ತಾರೆ. ಅವರುಗಳು ಶೀಘ್ರದಲ್ಲಿ ಅವರ ಕಷ್ಟಗಳನ್ನು ಪರಿಹರಿಸಿ ನ್ಯಾಯಯುತವಾದ ಜಯವನ್ನು ದೊರಕಿಸಿಕೊಟ್ಟು ಅವರಿಗೆ ಅನುಕೂಲ ಮಾಡಿಕೊಡಬೇಕೆಂದು ಹೇಳಿದರು.

ವಕೀಲರ ಭವನವನ್ನು ಬರೀ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಜಿಯವರೆ ನಿರ್ವಹಣೆ ಮಾಡಬೇಕೆಂದು ತಿಳಿಯಕೂಡದು, ಎಲ್ಲಾ ವಕೀಲರ ಜವಾಬ್ದಾರಿಯು ಇರುತ್ತದೆ, ಎಲ್ಲಾ ವಕೀಲರು ಸಹ ತಮ್ಮ ಸ್ವತಹ ಮನೆಯನ್ನು ನೋಡಿಕೊಂಡಂತೆ ನೋಡಿಕೊಂಡಾಗ ಮಾತ್ರ ಭವನವು ಸುಂದರವಾಗಿರುತ್ತದೆ ಎಂದರು.

ಈ ಸಂದರ್ಭದಲ್ಲಿ ಕಿರಿಯ ಶ್ರೇಣಿಯ ನ್ಯಾಯಾಧೀಶರಾದ ಚೇತನರವರು ವಕೀಲರ ಸಂಘದ ಅಧ್ಯಕ್ಷ ಅರುಣ್ ಕುಮಾರ್, ಕಾರ್ಯದರ್ಶಿ ದೇವರಾಜ, ಖಜಾಂಜಿ ಇರ್ಫಾನ್, ಹಿರಿಯ ವಕೀಲರಾದ ಶಂಕರಯ್ಯ, ಮಹೇಶ, ನಾಗರಾಜು ಸೇರಿದಂತೆ ಎಲ್ಲಾ ವಕೀಲರು ಸಹ ಹಾಜರಿದ್ದರು.

MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *