ಸಕಲೇಶಪುರ: 20 ವರ್ಷದ ಯುವಕ ಹೃದಯಾಘಾತದಿಂದ ಮೃತಪಟ್ಟಿರುವ ಪ್ರಕರಣ ನಡೆದಿದೆ. ತಾಲೂಕಿನ ಬೆಳಗೋಡು ಹೋಬಳಿ, ಯಡೇಹಳ್ಳಿ ಗ್ರಾಮದ ಚಂದನ್(20) ಹೃದಯಾಘಾತದಿಂದ ಮೃತನಾದ ಯುವಕನಾಗಿದ್ದು ಮನೆಯಲ್ಲಿದ್ದಾಗ ಅನಾರೋಗ್ಯಕ್ಕೆ ತುತ್ತಾಗಿ ಕುಸಿದು ಬಿದ್ದಿದ್ದ. ತದ ನಂತರ ಆಸ್ಪತ್ರೆಗೆ ರವಾನೆ ಮಾಡುವ ವೇಳೆ ಸಾವನಪ್ಪಿದ್ದಾನೆ.
ಗ್ರಾಮದ ಬಸವರಾಜಯ್ಯ ಸುಧಾ ಅವರ ಪುತ್ರನಾಗಿದ್ದು, ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ. ಮೇಲ್ನೋಟಕ್ಕೆ ಹೃದಯ ಸ್ತಂಭನ ಉಂಟಾಗಿದೆಯೆಂದು ವೈದ್ಯರು ಹೇಳಿದ್ದು, ಮರಣೋತ್ತರ ಪರೀಕ್ಷೆ ನಂತರ ಸಾವಿನ ನಿಖರ ಕಾರಣ ತಿಳಿದು ಬರಲಿದೆ.