News Karnataka
ಸಿಟಿಜನ್ ಕಾರ್ನರ್

10 ಎಕರೆಗೂ ಹೆಚ್ಚಿನ ಕಾಫಿ ತೋಟ ಬೆಂಕಿಗಾಹುತಿ

A ten acre coffee plantation belonging to a former has been gutted by fire at Hosahalli village under Valalahalli Gram Panchayat.
Photo Credit : Bharath

ಸಕಲೇಶಪುರ: ತಾಲೂಕು ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಹಳ್ಳಿ ಗ್ರಾಮದಲ್ಲಿ ಥಾಳನೇರಿ ಗುಡ್ಡದ ಸುತ್ತಮುತ್ತಲಿನ ಪ್ರಕೃತಿ ವೀಕ್ಷಣಾ ಟವರ್ ಪ್ರದೇಶ ಸೇರಿದಂತೆ, ರೈತರಿಗೆ ಸೇರಿದ 10 ಎಕರೆ ಹೆಚ್ಚಿನ ವಿಸ್ತೀರ್ಣದ ಕಾಫಿ ತೋಟಗಳು ಭಾನುವಾರ ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ.

ಪ್ರವಾಸಿ ತಾಣವಾದ ಗುಡ್ಡದ ಮೇಲೆ ಬೆಳೆದ ಹುಲ್ಲಿಗೆ ತಗಲಿದ ಬೆಂಕಿಯು, ಗಾಳಿಯ ರಬಸಕ್ಕೆ ಅಕ್ಕ ಪಕ್ಕದಲ್ಲಿದ್ದ ರೈತರ ಕಾಫಿ ತೋಟಗಳಿಗೆ ಹತ್ತಿಕೊಂಡು ಬೆಳೆದು ಫಸಲಿಗೆ ಬಂದಿದ್ದ ಕಾಫಿ ಗಿಡಗಳು ಸೇರಿದಂತೆ ತೋಟದಲ್ಲಿದ್ದ ಇತರ ಮರಗಳು ಬೆಂಕಿಗೆ ಆಹುತಿ ಆಗಿದೆ. ಗ್ರಾಮಸ್ಥರು ಸೇರಿ ಬೆಂಕಿ ನಂದಿಸುವಲ್ಲಿ ಹರಸಾಹಸ ಪಡಬೇಕಾಯಿತು.

ಪ್ರಕೃತಿ ವೀಕ್ಷಣಾ ಟವರ್, ಸರ್ಕಾರಿ ಗೋಮಾಳು ಸೇರಿದಂತೆ ಗ್ರಾಮದ ರೈತರಾದ ಹೆಚ್.ಎಸ್ ತಮ್ಮೇಗೌಡ, ಎಚ್.ಡಿ.ವಸಂತ್  ಹಾದಿಮನೆ, ಪಾರ್ವತಮ್ಮ, ಮಲ್ಲೇಶ, ಕೊಣಬನಹಳ್ಳಿ ಪ್ರಕಾಶ್, ಚೀರಿ ಸುರೇಶ ಅವರರಿಗೆ ಸೇರಿದ 10 ಎಕರೆಗೂ ಹೆಚ್ಚು ಕಾಫಿ ತೋಟ ಬೆಂಕಿಗಾಹುತಿಯಾಗಿದೆ.

ಪ್ರಕೃತಿ ಮಾತೆಯ ಕೋಪವೋ ಅಥವಾ ಮೋಜು ಮಸ್ತಿಗಾಗಿ ಬಂದು ಮಾಡಿದ ಎಡವಟ್ಟಿಗೂ ರೈತರು ಕಷ್ಟ ಪಟ್ಟು ಬೆಳೆದ ಬೆಳೆಯು ಬೆಂಕಿಗೆ ಆಹುತಿಯಾಗಿ ರೈತರು ಕಣ್ಣೀರು ಹಾಕುವಂತಾಗಿದೆ.

MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *