News Karnataka
ಸಿಟಿಜನ್ ಕಾರ್ನರ್

ಮನೆಗೆ ಬೆಂಕಿ ಬಿದ್ದು ಸುಟ್ಟು ಕರಕಲಾದ ವಸ್ತುಗಳು

A fire broke out in the house of Bagyamma in Belur and all the belongings were burnt and now she has no house to live in.
Photo Credit : Bharath

ಬೇಲೂರು: ಮೂರು ದಿನಗಳ ಹಿಂದೆ ಕೆರೆಬೀದಿಯ ಬಾಗ್ಯಮ್ಮ ಹಾಗೂ ನಾಗರಾಜು ಅವರ ವಾಸದ ಮನೆಗೆ ಬೆಂಕಿ ಬಿದ್ದು ಎಲ್ಲಾ ವಸ್ತುಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದ್ದವು. ನಂತರ ಆ ಮನೆಯವರು ತಮ್ಮ ಮಗಳ ಮನೆಯಲ್ಲಿ ಸದ್ಯ ವಾಸವಿದ್ದು ಅವರಿಗೆ ವಾಸ ಮಾಡಲು ಇದ್ದಂತ ಮನೆ ಸಂಪೂರ್ಣ ರಿಪೇರಿಯಾಗದ ರೀತಿಯಲ್ಲಿ ಬೆಂಕಿಗೆ ಆಹುತಿಯಾಗಿದ್ದು ಈಗ ಜೀವನ ನಡೆಸಲೂ ತೊಂದರೆಯಾಗಿದೆ.

ಇದನ್ನು ಮನಗಂಡು ಮನೆಯ ಕುಟುಂಬದವರನ್ನು ವಿಚಾರಿಸಲು ಬಂದ ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ, ನೊಂದಿರುವ ಕುಟುಂಬದವರನ್ನು ಸಂತೈಸಿ ನಂತರ ಮಾತನಾಡಿದ ಅವರು ಕೆರೆಬೀದಿಯಲ್ಲಿ ವಾಸವಾಗಿದ್ದ ಭಾಗ್ಯಮ್ಮ ಹಾಗೂ ನಾಗರಾಜ್ ಎಂಬುವರ ಮನೆಯು ಆಕಸ್ಮಿಕ ಬೆಂಕಿ ಕೆನ್ನಾಲಿಗೆಯಿಂದ ಮನೆ ಸಂಪೂರ್ಣ ಭಸ್ಮವಾಗಿದೆ. ಕುಟುಂಬ ನಿರ್ವಹಣೆ ಮಾಡಲು ದುಸ್ಥಿಯಲ್ಲಿರುವ ಇವರಿಗೆ ತಾಲೂಕು ಕಚೇರಿಯಿಂದ ಅರ್ಜಿಕೊಡಲು ಹೇಳಿದ್ದು ಹಾಗೂ ಪುರಸಭೆಯಿಂದ ಹಳೆ ಮನೆ ದುರಸ್ಥಿ ಏನಾದರೂ ಇದೆ ಎಂದು ಪರಿಶೀಲಿಸಿ ಇವರಿಗೊಂದು ಉಳಿಯಲು ವ್ಯವಸ್ಥೆ ಮಾಡಿಕೊಡಬೇಕಿದೆ. ಇವರು ತುಂಬಾ ಬಡತನದಲ್ಲಿ ಇದ್ದು ಮನೆ ಪೂರ್ತಿ ಸಂಪೂರ್ಣ ನಾಶವಾಗಿದೆ.ಈಗ ಅವರು ಮಗಳ ಮನಯಲ್ಲಿ ಇರೋದರಿಂದ ಅವರಿಗೆ ದಿನಸಿ ಪಡಿತರ ನೀಡಲು ಹೇಳಿದೀನಿ, ಕಾಂಗ್ರೆಸ್ ನ ಬಿ ಶಿವರಾಂ ಕೂಡ ಇಲ್ಲಿಗೆ ಬಂದು ಅವರಿಗೆ ಸಹಾಯ ಮಾಡಿದ್ದಾರೆ. ನಾನು ಕೂಡ ಪುರಸಭೆ ವತಿಯಿಂದ ಏನಾದರೂ ಸವಲತ್ತು ಇದ್ದರೆ ಮಾಡಿಕೊಡಲು ಸಿದ್ದನಿದ್ದೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ರವೀಶ್ ಬಸವಾಪುರ, ಭಾಗ್ಯಮ್ಮ, ನಾಗರಾಜು ಕಟುಂಬದವರು ಹಾಜರಿದ್ದರು.

MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *