News Karnataka
ಕ್ಯಾಂಪಸ್

“ಹಾಸನ ವಿಶ್ವವಿದ್ಯಾಲಯ” ಉದ್ಘಾಟನೆ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಹೇಮ ಗಂಗೋತ್ರಿ

Hassan University was inaugurated by the new chancellor Prof. Taranath at Hemagangotri Hall in Hassan city.
Photo Credit : Bharath

ಹಾಸನ: ನಗರದ ಹೇಮ ಗಂಗೋತ್ರಿ ಸಭಾಂಗಣದಲ್ಲಿ “ಹಾಸನ ವಿಶ್ವ ವಿದ್ಯಾಲಯ”ವನ್ನು ನೂತನ ಕುಲಪತಿ ಫ್ರೋ. ತಾರಾನಾಥ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಅಮೃತ ಹಸ್ತದಿಂದ ವರ್ಚ್ಯುಯಲ್ ಮೂಲಕ ಉದ್ಘಾಟನೆ ಗೊಳ್ಳುತ್ತಿರುವ ೯ ವಿಶ್ವ ವಿದ್ಯಾಲಯಗಳ ಪೈಕಿ ಹಾಸನ ವಿಶ್ವ ವಿದ್ಯಾಲಯವೂ ಒಂದಾಗಿದ್ದು ಇದೊಂದು ಐತಿಹಾಸಿಕ ಕ್ಷಣವಾಗಿದೆ ಎಂದರು.

ಈ ಹಿಂದೆ ಸಂಸ್ಥೆಗಾಗಿ ದುಡಿದ ಅನೇಕರ ಶ್ರಮದ ಫಲವಾಗಿ ಇಂದು ವಿಶ್ವ ವಿದ್ಯಾನಿಲಯವಾಗಿ ಹೊರ ಹೊಮ್ಮುತ್ತಿದೆ. ಇಂದಿನಿಂದ ಹಾಸನ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡಲಿ ಎಂದರು. ರಾಜ್ಯದ ಕಲೆ, ಸಂಸ್ಕೃತಿ, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿಯು ಹಾಸನ ವಿಶೇಷ ಸ್ಥಾನ ಗಳಿಸಿದೆ. ರಸ, ಋಷಿಗಳ ನಾಡಿನ ಮಡಿಲು ಹಾಸನ ಜಿಲ್ಲೆಯಲ್ಲಿ ವಿಶ್ವ ವಿದ್ಯಾಲಯವನ್ನು ಉತ್ತಮವಾಗಿ ಮುನ್ನಡೆಸಿಕೊಂಡು ಹೋಗಲು ಎಲ್ಲರ ಸಹಕಾರ ಅಗತ್ಯ ಎಂದರು.

ಹಿರಿಯ ಪತ್ರಕರ್ತರಾದ ಆರ್.ಪಿ ವೆಂಕಟೇಶ ಮೂರ್ತಿ ಮಾತನಾಡಿ, ವಿಶ್ವವಿದ್ಯಾನಿಲಯ ಎಂದರೆ ವಿಶ್ವಕ್ಕೆ ಉತ್ತಮ ವಿದ್ಯಾರ್ಥಿಗಳನ್ನು ಕೊಡುಗೆಯಾಗಿ ನೀಡುವ ಜವಾಬ್ದಾರಿಯುತ ಸಂಸ್ಥೆ, ಆದುದರಿಂದ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಕುಲಪತಿಗಳು ಶ್ರಮ ವಹಿಸಬೇಕು ಎಂದು ಸಲಹೆ ನೀಡಿದರು. ೩೧ ವರ್ಷದ ಹಳೆಯ ಸ್ನಾತಕೋತ್ತರ ಕೇಂದ್ರ ಇಂದು ವಿಶ್ವವಿದ್ಯಾಲಯವಾಗಿ ಹೊರ ಹೊಮ್ಮುತ್ತಿರುವುದು ತುಂಬಾ ಸಂತೋಷದ ವಿಚಾರವಾಗಿದೆ. ಇದೊಂದು ಹಾಸನ ಜಿಲ್ಲೆಯ ಸಂಸ್ಕೃತಿಕ ಕೇಂದ್ರವಾಗಿ ಹೊರ ಹೊಮ್ಮಬೇಕಿದೆ. ಈ ನಿಟ್ಟಿನಲ್ಲಿ ಸುಸಜ್ಜಿತ ಪರಿಸರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದರು.

ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಸಿ.ಈ.ಸುಜಾತ, ಪ್ರೊ. ಮಂಜುನಾಥ, ಪ್ರೊ. ಮಹದೇವಪ್ಪ, ಪ್ರೊ. ಶಂಕರ, ಪ್ರೊ. ಮಹಾದೇವ ಪ್ರಸಾದ, ಪ್ರೊ. ರವೀಂದ್ರ ಬಾಬು, ಪ್ರೊ. ಪುಟ್ಟಸ್ವಾಮಿ, ಪ್ರೊ. ಹಾಲಪ್ಪ ಇತರರು ಇದ್ದರು.

MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *